ಯಾಕೆ ನೀನು ಮತ್ತೆ ನನ್ನ ವರ್ತಮಾನಕ್ಕೆ ಬಂದಿದಿಯ ? ಜೀವನದಲ್ಲಿ ಬಂದಿದ್ದು ಅನುಭವಿಸಬೇಕು , ಇಲ್ಲೇ ಇದ್ದು ಜಯಿಸಬೇಕು ಅಂತ ಮನಸನ್ನ ಗಟ್ಟಿ ಮಾಡಿಕೊಂಡು ಈ ಜೀವನದ ಜೊತೆ compromise ಮಾಡ್ಕೊಂಡು ಬದುಕುತ್ತ ಇದ್ದೆ . ಆದ್ರೆ ನೀನ್ಯಾಕೆ ಮತ್ತೆ ಬಂದು ನನ್ನ ತಿಳಿಯಾದ ಮನಸ್ಸಿನಲ್ಲಿ ಕಲ್ಲು ಎಸೆಯುತ್ತ ಇದಿಯಾ ? ಯಾಕೆ ಮತ್ತೆ ನನ್ನ ಜೀವನದಲ್ಲಿ ಬಂದು ಕಾಡ್ತಾ ಇದ್ದೀಯ? ನಿನ್ನನ್ನ ನಾನು ಕಾಯಾ , ವಾಚಾ , ಮನಸಾ ಪ್ರೀತಿಸಿದ್ದೆ . ನೀನಗೊಸ್ಕರ್ ಹೆತ್ತ ಅಪ್ಪ ಅಮ್ಮನೇ ದೂರು ಮಾಡ್ಕೊಳಕ್ಕೆ ತಯಾರಿದ್ದೆ . ನೀನಗೊಸ್ಕರ್ ಈ ಸಮಾಜನ ಎದಿರಿಸಿ ನಿಲ್ಲೋ ದಿಟ್ಟ ದೈರ್ಯನು ನನ್ನಲ್ಲಿ ಇತ್ತು . ಆದ್ರೆ ನೀನು ಏನು ಮಾಡಿದೆ ? ಈ ಸಮಾಜಕ್ಕೆ , ನಿಮ್ಮ ಮನೆಯವರ ಗೌರವಕ್ಕೆ ನಮ್ಮ ಪ್ರೀತಿನ ಬಲಿ ಕೊಟ್ಟೆ . ನಿಂಗೆ ಬರಿ ನಾನು ಹಿಂದೂ ನೀನು ಮುಸ್ಲಿಂ ಅನ್ನೋ ಆತಂಕದ ಮುಂದೆ ನಮ್ಮ ಪ್ರೀತಿನ ಮಣ್ಣು ಮಾಡಿ ಬಿಟ್ಟಿದ್ದಿಯಲ್ಲ . ಊರೆಲ್ಲ , ನನ್ನ ಗೆಳತಿಯರೆಲ್ಲ ಅಸೂಯೆ ಪಡುವಸ್ಟು ನನ್ನ ಪ್ರಿತಿಸುತ್ತಿದ್ದಾಗ ನಿಂಗೆ ಗೊತ್ತಿರಲಿಲ್ವಾ ನಾನು ಒಬ್ಬ ಹಿಂದೂ ಹುಡುಗಿ ಅಂತ . ಹರೆಯದ ಭರದಲ್ಲಿ , ಯವ್ವನದ ಹುಚ್ಚಿನಲ್ಲಿ ಈ ಸಮಾಜದ ನೀತಿ ನಿಯಮಗಳು ನಿಂಗೆ ಕಾಣಿಸಲಿಲ್ಲ ಅಲ್ಲಾ? ನನ್ನ ಜೀವನ ಪರ್ಯಂತ್ ಹೀಗೆ ಪ್ರಿತಿಸಬೇಕಾದ್ರೆ ನೀನು ಈ ಸಮಾಜನ ಎದುರಿಸಿ ನಿಲ್ಲಬೇಕಾಗುತ್ತೆ ಅನ್ನೋ ಸತ್ಯ ನಿಂಗೆ ತಿಳಿದಿರಲಿಲ್ವಾ ? ಮನೆಯಲ್ಲಿ ಈ ವಿಷಯ ಗೊತ್ತಾಗಿ ನಾನು ಇನ್ನು ೧೮ ತುಂಬುವದರೊಳಗೆ ನನಗೆ ಮದುವೆ ಮಾಡೋಕೆ ಗೊತ್ತು ಮಾಡಿದ ಮೇಲೆ ಬಂದು " ಇವಳು ನನ್ನ ಪ್ರೀತಿ , ನನ್ನ ಜೀವ , ಇವಳಿಲ್ದೆ ನಾನು ಬದುಕಿರಲಾರೆ , ಪ್ಲೀಸ್ ನನ್ನ ಪ್ರೀತಿನ ನಂಗೆ ಕೊಟ್ಬಿಡಿ " ಅಂತ ನಮ್ಮ ಅಪ್ಪ ಅಮ್ಮನ ಕಾಲು ಹಿಡ್ಕೊತಿಯಾ ಅಂದ್ಕೊಂಡಿದ್ದೆ , ನೀನು ಅದು ಮಾಡಲಿಲ್ಲ . ಆದ್ರೆ ನಾನು ಸೋಲಲಿಲ್ಲ ಮನೆಯವರ ಜೊತೆ ಜಗಳ ಮಾಡಿದೆ , ಊಟ ಬಿಟ್ಟೆ ಒಂದಿನ ಮನೇನು ಬಿಟ್ಟು ನಿನ್ನ ಹತ್ರ ಬಂದು ತಬ್ಬಿಕೊಂಡು ಅತ್ತಾಗ್ ನೀನು ನಂಗೆ "ಈ ಸಮಾಜಕ್ಕೆ ಸೋತು ಬಿಡು , ನಮ್ಮ ಪ್ರೀತಿ ಯಾವಾಗಲು ಒಂದಾಗೋಲ್ಲ " ಅಂತ ಉಪದೇಶ ಬೇರೆ ಮಾಡಿ ವಾಪಸ್ಸು ಕಳಿಸಿ ಬಿಟ್ಟಿದ್ದೆ .ನಂಗೊತ್ತಿತ್ತು ಉಪಜೀವನಕ್ಕೆ ನೀನು ಇನ್ನು ಹೆಣಗತಾಇರೋ ಸಮಯ ಅದು . ನೀನು ನಿನ್ನ ಸ್ವಂತ್ ಪ್ರತಿಭೆಯಿಂದ , ಯಾರ್ ಮುಂದೆ ಕೈ ಚಾಚದೆ ನಿನ್ನದೇ ಒಂದು ಬಿಸಿನೆಸ್ ಅಂತ ಅವಾಗ್ ಸ್ಟಾರ್ಟ್ ಮಾಡ್ಕೊಂಡಿದ್ದೆ . ಅದರಲ್ಲಿ ನೀನು ಎಡುವುತ್ತ ಬಿಳುತ್ತ ಏಳುತ್ತಾ ಇರೋ ದಿನಗಳು ಅವು . ಆದ್ರೆ ನಾನು ನಿಂಗೆ ಹೇಳಿರಲಿಲ್ಲವ " ರಫೀಕ್ ನಂಗೆ ಆಸ್ತಿ ಪಾಸ್ತಿ ಏನು ಬೇಡ ಬರಿ ಎರಡ ಹೊತ್ತು ಊಟ ಹಾಕಿ ಪ್ರೀತಿಯಿಂದ ನನ್ನ ನೋಡ್ಕೋ ,ಆ ಶಕ್ತಿ ಈಗ ನಿಂಗೆ ಇದೆ , ಪ್ಲೀಸ್ ನನ್ನ ವಾಪಸ್ ಕಳಿಸಬೇಡ " ಅಂತ . ಆದ್ರೆ ನೀನು ನನ್ನ ಮುಖಾನು ನೋಡದೆ " ಪ್ಲೀಸ್ ಹೊರಟು ಹೋಗು " ಅಂತ ಹೇಳಿ ಮತ್ತೆ ಯಾಕೆ ಬಂದೆ ಈಗ . t
ಅದು ನಾನೋಬ್ಬರ್ ಹೆಂಡತಿ ಹಾಗೂ ೨ ಮಕ್ಕಳ ತಾಯಿ ಆದ್ಮೇಲೆ ಬಂದು ನನ್ನ ಜೀವನದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದಿಯಲ್ಲ . ಈವಾಗ್ ಎಲ್ಲಿಂದ ಬಂತು ನಿಂಗೆ ದೈರ್ಯ ? ಈ ದೈರ್ಯ ಆವಾಗ್ ಇದ್ದಿದ್ದರೆ ಪ್ರತಿದಿನವೂ ಸಾಯುತ್ತ ನಾ ಬದುಕುತ್ತಿರಲಿಲ್ಲ . ನಿಂಗೊತ್ತಾ ವಾಪಸು ಹೋದಮೇಲೆ ಮನೇಲಿ ಅಪ್ಪ ಅಮ್ಮಂಗೆನನ್ನ ಯಾರಿಗಾದರು ಗಂಟು ಹಾಕಿ ಬಿಡೋಣ ಅನ್ನೋ ಅತುರ್ ಜಾಸ್ತಿ ಆಯಿತು . ಅವ್ರಿಗೆ ನಾನು ಮನೆ ಬಿಟ್ಟು ಹೋದ ವಿಷಯ ಊರೆಲ್ಲ ಗೊತ್ತಾಗೋ ,ಮುಂಚೆನೆ ನನ್ನ ಕುತ್ತಿಗೆಗೆ ಮೂರು ಗಂಟು ಹಾಕಬೇಕು ಅನ್ನೋ ತರಾತುರಿ. ಆವಾಗ ಬಂದಿದ್ದೆ ಈ ಸಂಬಧ . ಮಾವ ಚೆನ್ನಾಗಿ ಆಸ್ತಿ ಮಾಡಿ ಬಿಟ್ಟು ಹೋಗಿದ್ದಾರೆ , ಆದ್ರೆ ಆ ಆಸ್ತಿನ ಉಳಿಸ್ಕೋ ಬೇಕು ಮತ್ತು ಬೆಳಿಸ್ಕೋ ಬೇಕು ಅನ್ನೋ ಛಲ ಇಲ್ಲದ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ . ಆ ಎರಡು ಗಂಡು ಮಕ್ಕಳಲ್ಲಿ , ಚಿಕ್ಕ ಮಗನಿಗೆ ನನ್ನ ಗಂಟು ಹಾಕಿದರು . ಕೆಲಸಕ್ಕೆ ಬಾರದೆ ಬರಿ ಕೂತು ತಿನ್ನೋವರು ಅಂತ ಅವರಿಗೆ ಯಾರು ಹೆಣ್ಣು ಕೊಟ್ಟಿರಲಿಲ್ಲ , ಮನೆ ಬಿಟ್ಟು ಓಡಿ ಹೋಗಿ ವಾಪಸು ಬಂದಿರೋ ನಂಗೆ ಗಂಡು ಸಿಗೋಲ್ಲ ಅಂತ ನನ್ನ ಅವರಿಗೆ ಮದುವೆ ಮಾಡಿಸಿದರು . ನನಗೆ ನನ್ನ ಗಂಡ ಅಂದ್ರೆ ಹಾಗಿರಬೇಕು , ಹೀಗೆರ್ಬೇಕು , ಅವನು ಸ್ವಂತ್ ಕಾಲಿಂದ ಮೇಲೆ ಬರಬೇಕು , ಚುರುಕಾಗಿರಬೇಕು , ಆಕರ್ಷಣಿಯ ವ್ಯಕ್ತಿತ್ವ ಇರ್ಬೇಕು , ಒಳ್ಳೆ ನಡೆ ನುಡಿ , ಯಾವಾಗಲು ನಗು ನಗುತ್ತ ಮಾತನಾಡುವ ಜೊತೆ ಜೊತೆಗೆ ಜೀವನವನ್ನ ಸವಾಲಾಗಿ ಸ್ವೀಕರಿಸಿ ಏನಾದ್ರು ಸಾಧಿಸಬೇಕು , ಮೇಲಾಗಿ ಏನೆ ಕಷ್ಟ ಬಂದ್ರು ನನ್ನ ಹಾಗೋ ನನ್ನ ಮಕ್ಕಳನ್ನ ಸಾಕೋ ಕ್ಯಾಪಸಿಟಿ ಇರ್ಬೇಕು , ಒಂದರ್ಥದಲ್ಲಿ ನಿನ್ನ ಥರ ಇರ್ಬೇಕು ಅಂತ ಕನಸು ಕಂಡಿದ್ದು ನುಚ್ಚು ನೂರಗಲಿಕ್ಕೆ ನನ್ನ ಮದುವೆ ಸಾಕಾಗಿತ್ತು . ಬಹುತೆಕ್ ಈವೆಲ್ಲ ಗುಣ ಇವರಲ್ಲಿ ಇದ್ದಿದ್ರೆ ನಿನ್ನ ಮರಿತಿದ್ದೆ ಅನ್ನಿಸುತ್ತೆ , ಎಲ್ಲ ಬೇಡ ಅದರಲ್ಲಿ ಸ್ವಲ್ಪ ಗುಣನಾದ್ರೂ ಇದ್ರು ನೀನು ನನ್ನ ಜೀವದಲ್ಲಿ ಇದ್ದೆ ಅನ್ನೋದನ್ನೇ ಬೇರು ಸಹಿತ ಕಿತ್ತೊಗೆಯುತ್ತಿದ್ದೆ ಅನ್ನಿಸುತ್ತೆ . ಆದ್ರೆ ಇದಕ್ಕೆಲ್ಲ ತದ್ವಿರೋಧವಾಗಿರೋ ಇವರ ಜೊತೆ ಜೀವನ ಮಾಡುವಾಗ್ ನಿನ್ನ ನೆನಪೇ ಒಂದು ಮನಸಿಗೆ ತಂಪು ಕೊಡುವ ಸಂಗತಿ ಆಗಿತ್ತು . ದಿನ ಬೆಳಿಗೆದ್ದರೆ ಒಂದು ೧೦ ರೂಪಾಯಿಗೂ ಅತ್ತೆ ಮುಂದೆ ಕೈ ಚಾಚೋ ಇವರನ್ನ ನೋಡಿ ಮನಸ್ಸು ಹೆಸಿತ್ತು . ಇವರಾ ನನ್ನ ಗಂಡ ಅನ್ನೋ ನೋವು ತಡಿಯೋಕೆ ಆಗದೆ ಹೃದಯ ಘಾಸಿಗೊಂಡಿದೆ .
ಹೀಗೆ ಇದೆ ನನ್ನ ಜೀವನ , ಇದೆ ನನ್ನ ವಾಸ್ತವ್ ಅಂತ ಕಷ್ಟ ಪಟ್ಟು ಮನಸ್ಸಿಗೆ ತಿಳಿ ಹೇಳಿ ಬದುಕಿಗೆ ಹೊಂದು ಕೊಂಡು ಹೋಗುತ್ತಿರುವಾಗ್ , ನೀನು ಮತ್ತೆ ಬಂದಿದಿಯ .ಈವಾಗ್ ನೀನು ಒಬ್ಬ ಜವಾಬ್ದಾರಿ ಇರೋ ಗಂಡ . ನಿನ್ನನ್ನೇ ನಂಬಿಕೊಂಡು ಇರೋ ನಿನ್ನ ಹೆಂಡತಿ , ಅಪ್ಪ , ಅಮ್ಮ . ಅದರಲ್ಲಿ ನಾನ್ ಯಾಕೆ ನಿಂಗೆ ಮತ್ತೆ ನೆನಪಾದೆ ? ನಿನ್ನ ಅರ್ಥ ಮಾಡಿಕೊಳ್ಳೋಕೆ ನನ್ನ ಬಿಟ್ಟು ಯಾರಿಗೂ ಸಾದ್ಯ ಇಲ್ಲ ಅಂತ ನಿಂಗೆ ಜೀವನದ ಈ ಮದ್ಯ ವಯಸ್ಸಿನಲ್ಲಿ ಅರ್ಥ ಆಯಿತೆ ?
ಮೊನ್ನೆ ಹುಬ್ಬಳಿ ಬಸ್ ಸ್ಟ್ಯಾಂಡ್ ಮೇಲೆ ನಮ್ಮಿಬ್ಬರ ಆಕಸ್ಮಿಕ್ ಭೆಟ್ಟಿ ಆದ್ಮೇಲೆ , ನಿಂಗೆ ನಾನು ಫೋನ್ ನಂಬರ್ ಕೊಟ್ಟಿದ್ದೆ ತಪ್ಪಾಗಿ ಹೋಯ್ತು ಅನ್ನಿಸ್ತ ಇದೆ . ಆಮೇಲೆ ನಿನ್ನ ಕಾಲ್ , ಅದು ಇದು ಮಾತಾಡುತ್ತ ಮತ್ತೆ ನಂಗೆ ನನ್ನ ಮನಸಿನ ಮೇಲಿನ ಹಿಡಿತ ತಪ್ಪಿ ಹೋಯ್ತು . ಮನೇಲಿ ಯಾರು ಇಲ್ಲ ಅಂದ್ರೆ ಬುದ್ದಿ ಬೇಡ ಅಂದ್ರುಮನಸ್ಸಿನ ಮಾತು ಕೇಳಿ ನಿಂಗೆ ಮಿಸ್ ಕಾಲ್ ಕೊಟ್ಟೆ ಬಿಡ್ತೀನಿ . ದಿನಕ್ಕೆ ಒಂದು ಸಲ ಆದರು ನಿನ್ನ ದ್ವನಿ ಕೇಳಬೇಕು . ಇಲ್ಲ ಅಂದ್ರೆ ಏನೋ ಕಳ್ಕೊಂಡ್ ಹಾಗೆ ಅನುಭವ .
ಮಾತಾಡಿದ ಮೇಲೆ ಯಾಕೋ ಒಂದು ಥರ guilt ಫೀಲ್ ಆಗುತ್ತೆ ಕಣೋ . ನಾಳೆ ಇಂದ ನಿನ್ನ ಫೋನ್ receive ಮಾಡಬಾರದು ಅಂದ್ಕೋತೀನಿ , ಆದ್ರೆ ಮರುದಿನ ನಾನೇ ನನ್ನ ಕಂಟ್ರೋಲ್ ಇಲ್ಲದೆ ನಿಂಗೆ ಮಿಸ್ ಕಾಲ್ ಕೊಡ್ತೀನಿ . ಇದೆಲ್ಲ ತಪ್ಪು ಅಂತ ಬುದ್ದಿ ವಾದ ಮಾಡ್ತಾ ಇದ್ದರೆ , ಮನಸ್ಸು ಮಾತ್ರ ನಿನ್ನ ಹತ್ರ ವಾಲುತ್ತ ಇದೆ . ಇದಕ್ಕೆ ಪೂರಕ್ ಎನ್ನುವಂತೆ ನೀನು ಸಹ ಈ ರೀತಿ ಮಾತಾಡೋಕೆ ಪ್ರೋತ್ಸಾಹ ಕೊಡ್ತಾ ಇದ್ದೀಯ . ಮೊದಲು ಸಮಾಜಕ್ಕೆ ಸೋತು ಬೀಡು ಅಂತ ನಂಗೆ ಹೇಳಿದವನು , ಈವಾಗ ಯಾಕೆ ನೀನು ನಿನ್ನ ಮನಸ್ಸಿಗೆ ಮತ್ತೆ ಸೋಲ್ತಾ ಇದ್ದೀಯ . ನೀನಾದ್ರು ನಿನ್ನ ಮನಸ್ಸನ ಹತೋಟಿಯಲ್ಲಿ ಇಟ್ಕೊಂಡು ನಂಗೆ ಮತ್ತೆ ಆ ಥರ ಉಪದೆಶ್ ಮಾಡ್ಬಾರ್ದಾ?
ನಿನ್ನ ಮುಖ ನೋಡಿದ ದಿನ ಅಂತು ನಂಗೆ ಹಬ್ಬ . ಪೂರ್ತಿ ದಿನ ಕಣ್ಣು ಮುಚ್ಚಿ ನಿನ್ನ ಮುಖ , ನಿನ್ನ ಶರ್ಟ್ , ನೀ ಕೊಟ್ಟ ಮುಗುಳ ನಗೆ , ನೀ ನಡೆದ ಭಂಗಿಗಳನ್ನ ರೀಪ್ಲೆ ಮಾಡಿ ಅದೆಷ್ಟು ಉತ್ಸಾಹದಿಂದ ಇರ್ತೀನಿ . ಇತ್ತೀಚಿಗೆ ಅಂತು ಮತ್ತೆ ೧೮ ವಯಸ್ಸಿನ ಹುಡುಗಿ ಥರ ಬರಿ ಅನ್ಯಮನಸ್ಕಳಾಗಿ , ನಿನ್ನ ಗುಂಗಿನಲ್ಲೇ ಇರ್ತೀನಿ . ಇತ್ತೀಚಿನ ಸಿನಿಮಾ ಪ್ರೆಮಗಿತೆಗಳನ್ನ ಕೇಳಿದ್ರೆ ಮತ್ತೆ ಆ ಹದಿ ಹರೆಯ ವಾಪಸ್ಸು ಬಂದ್ ಅನುಭವ .
ಇವೆಲ್ಲಗಳನ್ನು ಸಂಪೂರ್ಣವಾಗಿಯೂ ನಾನು ಆನಂದಿಸಲು ನನ್ನ ಕೈಲಿ ಆಗ್ತಾ ಇಲ್ಲ . ಯಾಕೆಂದರೆ ನನ್ನ ಗಂಡ ಕೈಲಾಗದವನು , ಸೋಮಾರಿ , ಎಲ್ಲದಕ್ಕೂ ಅವರ ಅಮ್ಮನ ಮುಂದೆ ನಿಂತು ಕೈ ಚಾಚೋವನು ಮಾತ್ರ , ಆದ್ರೆ ಕೆಟ್ಟವನಲ್ಲ ಅಂತ ನನ್ನ ಬುದ್ದಿ ನಂಗೆ ಹೇಳಿದ್ರು , ಮನಸ್ಸು ಮಾತ್ರ ಈ ನನ್ನ ಪ್ರೀತಿ ಮಾತ್ರ ನಿಂಗೆ ಅಂತ ಹೇಳಿ ನನ್ನನ್ನ ಇನ್ನು weak ಮಾಡ್ತಾ ಇದೆ .
ಇನ್ನೊಂದು ಸಲ ಇದೆ ಬುದ್ದಿ ನಂಗೆ " ಜೀವನ ಇರೋದು ಒಂದೇ ಸಲ , ಅದನ್ನ compromise ಮಾಡ್ಕೋಬೇಡ . ಸಮಾಜಕ್ಕೆ ಹೆದರಿ ನಿನ್ನ ಪ್ರೀತಿನ ಮತ್ತೆ ಬಲಿ ಕೊಡಬೇಡ , ಈ ರೀತಿ ನೀತಿ morals ಎಲ್ಲ ನಾವು ನಮಗೆ ಅನೂಕುಲಕ್ಕೆ ತಕ್ಕಂತೆ ಕಟ್ಟಿರುವುದು . ಇಲ್ಲಿವರೆಗೂ ಪ್ರತಿದಿನ ಸತ್ತು ಬದುಕಿದೆ . ಅದು ಒಂದು ಜೀವನಾನಾ ? ಇವಾಗ್ ನೀನು ಅವನ್ನ ಪ್ರೀತಿಸ್ತ ಇದ್ದೀಯ ಅಸ್ಟೇ. ನೀನು ಯಾರಿಗೂ ಮೋಸ ಮಾಡ್ತಾ ಇಲ್ಲ . ನಿಂಗೆ ಅವನ್ ಜೊತೆ ಮಾತಾಡಿದ್ರೆ ಸಂತೋಷ್ ಸಿಗೋ ಹಾಗಿದ್ರೆ ಮಾತಾಡು . ಮತ್ತೆ ಎಲ್ಲರ ಬಗ್ಗೆ ಯೋಚಿಸಿ ನಿಂಗೆ ನೀನೆ ಅನ್ಯಾಯಾ ಮಾಡ್ಕೋಬೇಡ . ಆಫ್ಟರ್ ಆಲ್ ನಿಂಗು ಸಂತೋಷ್ವಾಗಿರೋಕೆ ಹಕ್ಕು ಇದೆ " ಅಂತ ಕಿವಿಯೊಳಗೆ ಪ್ರತಿದ್ವನಿಸುತ್ತೆ .
ನಾನು ಏನು ಮಾಡಲಿ ನೀನೆ ಹೇಳೋ ...
ಇದನ್ನು ಓದೋ ನೀವೆಲ್ಲರೂ ಹೇಳಿ ನಾನು ಏನು ಮಾಡ್ಬೇಕು ?
( ಇದು ಸತ್ಯಘಟನೆ ಆದಾರಿತ ಕಥೆ, ನನ್ನ ಗೆಳತಿಯ ಜೀವನದಲ್ಲಿ ಬಂದು ನಿಂತಿರೋ ಘಟ್ಟ . ಅವಳು ಮಾಡುತ್ತಿರುವದು ತಪ್ಪು ಅಂತ ಅವಳಿಗೂ ಗೊತ್ತು . ಆದ್ರೆ ಇದರಿಂದ ಅವಳು ಹೊರ ಬರಲಿಕ್ಕೆ ಆಗ್ತಾ ಇಲ್ಲ , ಅವಳು ತೀವ್ರ depression ಗೆ ಒಳಗಾಗಿದ್ದಾಳೆ .
. ಇದಕ್ಕೆ ಪ್ರಸಾದ್ ( ನನ್ನ ಪತಿ ) ಎಲ್ಲಾದರು ಒಳ್ಳೆ ಕಡೆ ಅವಳಿಗೆ ಕೌನ್ಸೆಲ್ಲಿಂಗ್ ಅರೆಂಜ್ ಮಾಡೋಣ ಅಂತ ಇದ್ದಾರೆ .
ಅನುಭವಿಗಳು ಇರೋ ಈ ಬ್ಲಾಗ್ ಲೋಕದಲ್ಲಿ ಇದನ್ನ ಬರಿದ್ರೆ ನಿಮ್ಮ ಅಂತವರ ಅಭಿಪ್ರಾಯ ತಿಳಿದರೆ ಅವಳು ಏನು ಮಾಡ್ಬೇಕು ಅಂತ ಒಂದು ದಾರಿ ಸಿಗಬಹುದೇನೋ ಅಂತ ಆಶೆ ಇಂದ , ಅವಳ ಒಪ್ಪಿಗೆ ಮೇರೆಗೆ ಅವಳ ಮನಸ್ಸಿನ ಭಾವನೆಗಳನ್ನ ನನ್ನ ಪೆನ್ನಿನ ಮೂಲಕ ಈ ಪತ್ರದಲ್ಲಿ ಇಡ್ತಾ ಇದ್ದೀನಿ . ಪ್ಲೀಸ್ ನಿಮ್ಮ ಪ್ರಕಾರ ಅವಳು ಏನ್ ಮಾಡ್ಬೇಕು ಹೇಳಿ )